ಹರಿಯಗೊಡದಿರು ಮನವೇ
ಎಲ್ಲೆಂದರಲ್ಲಿ
ಮನವು ಮರ್ಕಟವೆಂಬ
ಮಾತು ನಿಜವಿಲ್ಲಿ.
ಓಡುವುದು ನದಿಯಂತೆ
ಬೀಸುವ ಗಾಳಿಯಂತೆ
ಕತ್ತಿಯ ಅಲುಗಿನಂತೆ
ಸುಳಿಯುವುದು ಕ್ಷಣ ಕ್ಷಣ
ಚಪಲ ಚಿತ್ತವ ಹಿಡಿದು ಕಟ್ಟುವ
ಇಂದ್ರಿಯ ನಿಗ್ರಹ ಶಕ್ತಿ
ಇದ್ದರೆ ನೀನಾಗುವೆ ಮಹಾವ್ಯಕ್ತಿ
ಯತ್ನದಿಂದ ಪ್ರಯತ್ನದಿಂದ
ಸಾಧನೆಯ ಬಲದಿಂದ
ಮನಕೆ ಹಾಕು ಲಗಾಮು
ನಿನಗೆ ತೋರುವ ಹಾದಿಯಲಿ
ಛಲದ ಅಭಿವ್ಯಕ್ತಿಯಲಿ
ಮನವ ಮುನ್ನಡೆಸು
ಮೂಗು ತೂರಿಸದಿರು
ಪರರ ವಿಷಯಾಸಕ್ತಿಗೆ
ಚಿಂತೆಯ ಚಿತೆಯಲಿ
ಬೇಯದಿರು ಬರಿದೆ
ಗಾಳಿಯನು ಗುದ್ದಿ
ಮೈ ನೋಯಿಸುವ ಪರಿ
ದುಡುಕುತನದ ದೂರ ಸರಿ
ಚಿಂತಿಸದಿರು ವ್ಯರ್ಥ ಜಿಜ್ಞಾಸೆಯಲಿ
ಕತ್ತಲಿನ ಗರ್ಭವ ಸೀಳಿ
ಹೊರಬರಲಿ ವಾಸ್ತವತೆಯ ಬೆಳಕು
ಹಣ ಅಂತಸ್ತು ಅಧಿಕಾರ
ಇರಬಹುದು ಬಾಳಿಗೆ ಸಾಕಾರ
ಜೀವನವೆಂದರೆ ನೂರು ಅರ್ಥ
ಅರ್ಥದಿಂದಲೇ ವೇದಾಂತ
ಸಿದ್ಧಾಂತ
ಅರಿತು ನಡೆದರೆ ಸುಖಾಂತ
*****
Related Post
ಸಣ್ಣ ಕತೆ
-
ರಣಹದ್ದುಗಳು
ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…
-
ಮರೀಚಿಕೆ
ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…
-
ತನ್ನೊಳಗಣ ಕಿಚ್ಚು
ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…
-
ತಿಥಿ
"ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…
-
ಅಜ್ಜಿಯ ಪ್ರೇಮ
ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…